ಪ್ರೀತಿಸುತ್ತಿದ್ದ ಯುವತಿ ಮತ್ತೊಬ್ಬನೊಂದಿಗೆ ಲವ್ವಿಡವ್ವಿ, ಯುವಕ ಆತ್ಮಹತ್ಯೆಗೆ ಶರಣು! | ಜನತಾ ನ್ಯೂಸ್
ಬೆಂಗಳೂರು : ಪ್ರೀತಿಸುತ್ತಿದ್ದ ಯುವತಿ ಇನ್ನೋರ್ವನನ್ನ ಪ್ರೀತಿಸಿದ್ದಳು ಮನನೊಂದ ಯುವಕ ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ನಿವಾಸಿ ಸಿದ್ದರಾಮ (33) ಮೃತ ದುರ್ದೈವಿ. ಬೆಂಗಳೂರಿನ ರಾಜರಾಜೇಶ್ವರಿನಗರದ ಮಾರಪ್ಪ ಲೇಔಟ್ನಲ್ಲಿ ಅಕ್ಕ-ಭಾವನ ಮನೆಯಲ್ಲಿ ಸಿದ್ದರಾಮ ವಾಸವಿದ್ದ. ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕ.
ಯುವಕನಿಗೆ ತನ್ನ ಸಂಬಂಧಿಯೊಬ್ಬರ ಮಗಳ ಮೇಲೆ ಪ್ರೇಮಾಂಕುರವಾಗಿತ್ತು. ಸಂಬಂಧದಲ್ಲಿ ಅಕ್ಕನ ಮಗಳೇ ಆಗಿದ್ದರಿಂದ ಇಬ್ಬರ ಪ್ರೀತಿಗೆ ಯಾರ ವಿರೋಧವೂ ಇರಲಿಲ್ಲ.
ಮೂರು ವರ್ಷಗಳಿಂದ ಪ್ರೀತಿಸಿದ ಯುವತಿ ಕೊನೆಗೆ ಮದುವೆಯಾಗುವುದಕ್ಕೆ ನಿರಾಕರಿಸಿದ್ದಾಳೆ. ಆಕೆ ಇನ್ನೋರ್ವನನ್ನ ಪ್ರೀತಿಸಿದ್ದಳು ಎನ್ನಲಾಗಿದೆ. ಆಕೆಯ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಇದ್ದಕ್ಕಿದ್ದಂತೆ ಆತ ನಿನ್ನೆ ಮಧ್ಯಾಹ್ನ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.